ಭರತ್ ಕುಮಾರ್.ಎ ಹೊಸಕೋಟೆ ಅವರು ನಿರ್ಮಿಸುತ್ತಿರುವ ‘ಉಗ್ರಾಕ್ಷ ಚಿತ್ರದ ಚಿತ್ರೀಕರಣ ಸೋಮವಾರ ಶ್ರೀಕಂಠೀರವ ಸ್ಟುಡಿಯೋದಲ್ಲಿ ಆರಂಭವಾಯಿತು. ನಾಯಕ ಅಭಿನವ್ ಶ್ರೇಯಸ್ ಅಭಿನಯಿಸಿದ ಚಿತ್ರದ ಪ್ರಥಮ ಸನ್ನಿವೇಶಕ್ಕೆ ಕ.ರ.ವೇ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷರು ಕೃಷ್ಣೇಗೌಡರು ಆರಂಭ ಫಲಕ ತೋರಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಥಾಮಸ್ ಡಿಸೋಜ ಕ್ಯಾಮೆರಾ ಚಾಲನೆ ಮಾಡಿದರು.
ಆರ್.ವಿಧಾ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಮುರಳಿ ಕ್ರಿಷ್ ಅವರ ಛಾಯಾಗ್ರಹಣವಿದೆ. ಎಂ.ಸಂಜೀವ್ ಸಂಗೀತ ನಿರ್ದೇಶನ, ಎನ್.ಎಂ.ವಿಶ್ವ ಸಂಕಲನ, ಗಣೇಶ್ ಸಾಹಸ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ ಹಾಗೂ ನಾಗರಾಜು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಅಭಿನವ್ ಶ್ರೇಯಸ್ ಅವರು ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ದೀಪಿಕ ಕಾಮಯ್ಯ. ತಬಲ ನಾಣಿ, ಶರತ್ ಲೋಹಿತಾಶ್ವ, ಅರುಣ್ ಸಾಗರ್, ವಿಕ್ಚರಿ ವಾಸು, ಮುನಿ, ಬ್ಯಾಂಕ್ ಜನಾರ್ದನ್, ರಾಕ್ಲೈನ್ ಸುಧಾಕರ್, ಉಗ್ರಂ ಮಂಜು, ಕೆಂಪೇಗೌಡ, ಚಂದನ್, ಧರ್ಮತೇಜ್, ಚಂದನ್, ಗಮ್ಯ, ಸೌಮ್ಯ, ಸುವರ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.